Saturday, September 26, 2015

ಹಳ್ಳಿ ಔಷಧದ ಬಗ್ಗೆ ಕಿರು ಪರಿಚಯ .

ಜ್ವರ , ಶೀತ , ಕಫ  ಇತ್ಯಧಿಗಳಿಗೆ ದಿವ್ಯ ಔಷಧ .


ಆಯುರ್ವೇದಿಕ್   ಗಿಡಮೂಲಿಕೆಗಳ ಕಿರು ಪರಿಚಯ .
೧) ಕಿರಾತ ಕಡ್ಡಿ .
 ಮಲೆನಾಡಿನ ಮನೆಯ ಸುತ್ತ  ಮುತ್ತಲು ಸಾಮಾನ್ಯವಾಗಿ ಈ ಗಿಡಗಳನ್ನು ಕಾಣಬಹುದು . ಪೊದರು ಜಾತಿಯ ಗಿಡ .



೨) ಅಮೃತ  ಬಳ್ಳಿ .
 ಸಾಮಾನ್ಯವಾಗಿ ಗಿಡಮರಗಳ ಆಶ್ರಯದಲ್ಲಿ ಬೆಳೆಯಬಲ್ಲ ಬಳ್ಳಿ .





೩) ಭದ್ರ ಮುಷ್ಠಿ :-
ಸಾಮಾನ್ಯವಾಗಿ ಮನೆಯ ಅಂಗಳದಲ್ಲಿ ಈ ಸಸ್ಯಗಳು ಬೆಳೆಯುತ್ತವೆ . ಭದ್ರ ಮುಷ್ಟಿಯ  ಗಡ್ಡೆಗಳನ್ನು  ಔಷಧಿಗೆ ಉಪಯೋಗಿಸುತ್ತಾರೆ .


೪) ಕಾಳು  ಮೆಣಸು .
ಸಾಂಬಾರು ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ .
 ಔಷಧೀಯ ಗುಣಗಳನ್ನು ಹೊಂದಿರುತ್ತದೆ .






೫)   ಶುಂಠಿ .      

ಸಾಂಬಾರು ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ .
 ಔಷಧೀಯ ಗುಣಗಳನ್ನು ಹೊಂದಿರುತ್ತದೆ  








ಔಷಧಿ ತಯಾರಿಸುವ ವಿಧಾನ .
1)  ಚಿತ್ರದಲ್ಲಿ ತೋರಿಸಿದ ಹಾಗೆ   ಎಲ್ಲ ಔಷಧಿಯ ವಸ್ತುಗಳನ್ನು ತೆಗೆದುಕೊಳ್ಳಬೇಕು .
೧) ಕಿರಾತ ಕಡ್ಡಿ  --  25 gram 
೨) ಅಮೃತ  ಬಳ್ಳಿ --  25 gram 
೩) ಭದ್ರ ಮುಷ್ಠಿ   --   25 gram 
೪) ಕಾಳು  ಮೆಣಸು  --  5 gram 
೫)  ಶುಂಠಿ  -- 25 gram  



2)  ಎಲ್ಲ ಔಷಧಿಯ ವಸ್ತುಗಳನ್ನು ಕಲ್ಲಿನಲ್ಲಿ ಕುಟ್ಟಿ ಪುಡಿ ಮಾಡಬೇಕು .
  






3)   ಕಷಾಯ ತಯಾರಿಸುವ ವಿಧಾನ

 ಕಲ್ಲಿನಲ್ಲಿ ಜಜ್ಜಿದ ಎಲ್ಲ  ಗಿಡ   ಮೂಲಿಕೆಗಳನ್ನು  , ಒಂದು ಪಾತ್ರೆಯಲ್ಲಿ 800 ML ನೀರು ಹಾಕಿ 200 ML ಆಗುವ ತನಕ ಕುದಿಸ ಬೇಕು . ದಿನಕ್ಕೆ  3 ಬಾರಿ ಸೇವಿಸ ಬೇಕು .  ಆಹಾರ ತೆಗೆಯುವ ಮೊದಲು ಉತ್ತಮ .  ( ಒಂದು ಬಾರಿಗೆ 50 ML   ಔಷಧಿಯನ್ನು ಸೋಸಿ   ಕುಡಿಯಬಹುದು .)

ಇದರ ಉಪಯೋಗಗಳು .
ಯಾವುದೇ ದುಷ್ಪರಿಣಾಮ ಇರುವುದಿಲ್ಲ .
ಇದು ದೇಹದಲ್ಲಿ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ .




Thank you ..
















Sunday, August 30, 2015

ಪ್ರಧಾನ ಮಂತ್ರಿ ಜನ ಧನ್ ಯೋಜನೆ

ಪ್ರಧಾನ ಮಂತ್ರಿ ಜನ ಧನ್ ಯೋಜನೆ

ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ
  • ಯಾವುದೇ  ದೇಶೀಯ ಬ್ಯಾಂಕುಗಳಲ್ಲಿ ಇದನ್ನು  ಮಾಡಿಸಬಹುದು.
  • ನೀವು  ಬ್ಯಾಂಕ್ ಖಾತೆ ಹೊಂದಿರಬೇಕು .
  • ಆಧರ್ ಕಾರ್ಡ್ ಮತ್ತು   ಕುಟುಂಬದ ಸದಸ್ಯರ ಅಧರ್ ಕಾರ್ಡ್ ಮತ್ತು  ಪ್ಯಾನ್   ಜೆರಾಕ್ಸ್ ತೆಗೆದುಕೊಂಡು ಹೋಗಬೇಕು
  • ಅಪಘಾತ ಮರಣ / ಕೈ ಅಥವಾ ಕಣ್ಣುಗಳನ್ನು ಕಳೆಧು ಕೊಂಡಲಿ .  2  ಲಕ್ಷದ ತನಕ ಜೀವ ವಿಮೆ ದೊರೆಯಲಿದೆ  .
  • ವಾರ್ಷಿಕ  12  ರೂಪಾಯಿ ನಿಮ್ಮ ಬ್ಯಾಂಕಿನಿಂದ ವಜಾ ಆಗಲಿದೆ  .
  • ಇದನ್ನು 18 ವರ್ಷದಿಂದ 70  ವರ್ಷದೊಳಗಿನ  ಎಲ್ಲ ಜನರು  ಮಾಡಿಸಬಹುದು .
  • ಕರೆಗೆ ಯಾವುದೇ ಖರ್ಚಿಲ್ಲದೆ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿಕೊಳ್ಳಬಹುದು  :- 1800 180 1111
  • ಕರೆ ಮಾಡಬಹುದಾದ ಸಮಯ  6AM - 10PM  ಆಗಿರುತ್ತದೆ.
                  ಪ್ರಧಾನ ಮಂತ್ರಿ ಜೀವನ ಜ್ಯೋತಿ  ಭೀಮಾ ಯೋಜನೆ .
  • ನಿಮ್ಮ ಸ್ವಾಭಾವಿಕ ಮರಣ 55  ವರ್ಷದ ಮೊದಲಿಗೆ ನಡೆದಲ್ಲಿ ನಿಮ್ಮನ್ನು ನಂಬಿದವರಿಗೆ  2  ಲಕ್ಷ  ರೂಪಾಯಿ ದೊರೆಯಲಿದೆ .
  • ವಾರ್ಷಿಕ  330  ರೂಪಾಯಿ ನಿಮ್ಮ ಬ್ಯಾಂಕಿನಿಂದ ವಜಾ ಆಗಲಿದೆ  .
  • ಯೋಜನೆಯನ್ನು  18  ವರ್ಷದಿಂದ 50  ವರ್ಷದೊಳಗಿನ   ಎಲ್ಲ ಜನರು ಮಾಡಿಸಬಹುದು .
  • ನಿಮ್ಮ  ವಯಸ್ಸು 55 ರ ತನಕ  ಈ ಯೋಜನೆಯ ಸದುವುಪಯೋಗ  ಪಡೆದುಕೊಳ್ಳಬಹುದು .
  • ಕರೆಗೆ ಯಾವುದೇ ಖರ್ಚಿಲ್ಲದೆ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿಕೊಳ್ಳಬಹುದು  :- 1800 180 1111
  • ಕರೆ ಮಾಡಬಹುದಾದ ಸಮಯ ( 6AM - 10PM  ) ಆಗಿರುತ್ತದೆ

         ಅಟಲ್ ಪೆನ್ಷನ್ ಯೋಜನೆ

  • ಪಿಂಚಣಿ ರೂಪದಲ್ಲಿ ನಿಮಗೆ 60 ವರ್ಷದ ನಂತರ ತಿಂಗಳಿಗೆ ( 1000 /2000 /3000 /4000 /5000 ) ರೂಪಾಯಿ ಗಳು ದೊರೆಯಲಿದೆ  . 
  • ನಿಮಗೆ  ಸಿಗುವ ಮೊತ್ತ ನೀವು ತಿಂಗಳಿಗೆ ಕಟ್ಟುವ ಹಣದ ಮೇಲೆ ನಿಗಧಿಯಗಿದೆ .
  • ಯೋಜನೆಯನ್ನು  18  ವರ್ಷದಿಂದ 40  ವರ್ಷದೊಳಗಿನ   ಎಲ್ಲ ಜನರು ಮಾಡಿಸಬಹುದು .
  • ತಿಂಗಳಿಗೆ ಕಟ್ಟಬೇಕಾದ ಮೊತ್ತವನ್ನು   ಕರೆಮಾಡಿ ತಿಳಿದುಕೊಳ್ಳಿ  . ಈ ಕರೆಗಳಿಗೆ ಯಾವುದೇ ಶುಲ್ಕ ವಿರುವುದಿಲ್ಲ
           1800 180 1111 . ಬ್ಯಾಂಕಿನಿಂದ ಮಾಹಿತಿ ಸಂಗ್ರಹಿಸಿ .
  • ಕರೆ ಮಾಡಬಹುದಾದ ಸಮಯ ( 6AM - 10PM  ) ಆಗಿರುತ್ತದೆ  .
  • ಯಾವುದೇ ಕಾರಣಕ್ಕೂ 60 ವರ್ಷದ ಮೊದಲು ನಿಮಗೆ ಹಣವನ್ನು ಪಡೆಯಲಾಗುವುದಿಲ್ಲ .

ಯೋಜನೆಯನ್ನು ಮಾಡಿಸಬೇಕು ಎಂದು ಬಯಸುವವರು .
ಶ್ರೀಹರಿ ಪ್ರಸಾದ ಕುದ್ದುಪದವು
ಫೋನ್ 9480014021 .
http://socialworkkudd.blogspot.in/

Sunday, August 23, 2015

ಬಿದಿರಿನ ಕೊಕ್ಕೆ ತಯಾರಿಸುವ ವಿಧಾನ




ಬಿದಿರಿನ ಕೊಕ್ಕೆ ತಯಾರಿಸುವ ವಿಧಾನ
ಬೇಕಾದ ಸಲಕರಣೆಗಳು:
ಬಿದಿರು (ಬೆಕಾದಷ್ಟು ಉದ್ದ)
ಕತ್ತಿ (ಕೈಯಲ್ಲಿ ಉಪಯೋಗಿಸುವ ಕತ್ತಿ)
ಗಳೆಕತ್ತಿ (ಚಿತ್ರದಲ್ಲಿ ಕಾಣಿಸಿದ್ದಂತಹುದು)
ಎರಡು ಸರಿಗೆ ತುಂಡುಗಳು
ಕಟ್ಟಿಂಗ್ ಪ್ಲ್ಯಯರ್
ರಂಧ್ರ ಕೊರೆಯುವ ಯಂತ್ರ (ಡ್ರಿಲ್)


  

ತಯಾರಿಸುವ ವಿಧಾನ:
·    ಬಿದಿರಿನ ಗಂಟುಗಳನ್ನು ತೆಗೆದು ನಯಗೊಳಿಸಿ.

·    ಬಿದಿರಿಗೆ ರಂಧ್ರಗಳನ್ನು ಕೊರೆಯಬೇಕು.

·    ಸರಿಗೆಯಿಂದ ಕತ್ತಿಯನ್ನು ಬಿದಿರಿನ ರಂಧ್ರದ ಮೂಲಕ ಕಟ್ಟಬೇಕು.

·    ಈ ತರಹದ ಕೊಕ್ಕೆಯನ್ನು ಕೊಕ್ಕೊ ತೆಗೆಯಲು ಉಪಯೋಗಿಸಬಹುದು.

      Thanks 

Saturday, August 22, 2015




ಹಿತ್ತಲ ಗಿಡಗಳ ಪರಿಚಯ ಮತ್ತು ಉಪಯೋಗ  

1) ಸಾಂಬ್ರಾಣಿ 
ಉಪಯೋಗಗಳು:
·       ಕಫ,ತಲೆ ಸಿಡಿತ,ಕೆಮ್ಮು ನಿವಾರಣೆಗೆ ಉಪಯೋಗಿಸಬಹುದು:ಸಾಂಬ್ರಾಣಿ ಗಿಡದ ಎಲೆಗಳನ್ನು ಬಾಡಿಸಿ ಅದರ ರಸವನ್ನು ಜೇನಿನೊಂದಿಗೆ ಸೇರಿಸಿ ಒಂದು ಚಮಚದಷ್ಟು ತಿನ್ನಬೇಕು.
·       ಚಟ್ನಿ ಮತ್ತು ಸಾಂಬಾರು ಮಾಡಬಹುದು.
.   ಮೈಮೇಲೆ ಗಜ್ಜಿ ,ತುರಿಕೆ ಎದ್ದಲ್ಲಿ ಸಾಂಬ್ರಾಣಿ  ಗಿಡದ ಎಲೆಗಳನ್ನು ಜಜ್ಜಿ ರಸವನ್ನು ಮೈಮೇಲೆ ಹಚ್ಚಬೇಕು.  ದಿನಕ್ಕೆ 4 -5 ಬಾರಿ ಸಚ್ಚುವುದರಿಂದ ಮೈಮೇಲಿನ ಗಜ್ಜಿ ತುರಿಕೆ ಕಡಿಮೆಯಾಗುತದ್ದೆ


2) ದರ್ಭೆ ಹುಲ್ಲು .

ಉಪಯೋಗಗಳು:
·       ಪೂಜಾ ಮತ್ತು ಶ್ರಾದ್ಧ ಕಾರ್ಯಕ್ರಮಕ್ಕೆ ಉಪಯೋಗಿಸುತ್ತಾರೆ.
ದರ್ಭೆ ಇದ್ದಲ್ಲಿ ದುಷ್ಟ ಶಕ್ತಿ ಇಲ್ಲ ಎಂದು ನಂಬಿಕೆ

3) ಲೋಳೆ ಸರ  ಗಿಡ

    ಉಪಯೋಗಗಳು:

·       ದನಗಳ ಕೆಚ್ಚಲು ಬಾವಿಗೆ ಉಪಯೋಗಿಸುತ್ತಾರೆ.Ø   ಇದರ ಎಲೆಗಳನ್ನು ಅರಸಿನ ಹುಡಿಯೊಂದಿಗೆ ಬೆರೆಸಿ ದಿನಕ್ಕೆ ೪-೫ ಬಾರಿ ಕೆಚ್ಚಲಿಗೆ ಹಚ್ಚಬೇಕು.·          ತಲೆಹೊಟ್ಟು ನಿವಾರಣೆಗೆ ಇದು ಉತ್ತಮ ಔಷದ.

              


Tuesday, August 18, 2015

Manure feeding Method


                                       
                                         Manure feeding Method for any plants .


                           1)   Clean the surrounding area .   Monsoon season more unwanted plants we can see   surroundings  area . Cleaning is one of the major responsibility to grow our useful plants .  

                  



                     2)  Dig the surrounding keeping 15-20 cms distance from the stem .



3)      Put proper amount of manure at the distance of 15-20 cms away from the stem.



4)  Put some other waste plants ,leaves &stem.( Gliricidia )


5)        Pour  proper amount of water
                                  
  

6)  Good fertilizer plant will grow very quickly .


Thank for your support .





Saturday, August 15, 2015



We have celebrated 69th  independence day at our village School .




We have distributed flags  Sweet and we have explained the importance of this day ..

Wednesday, August 12, 2015

We have cleaned Kuddupadavu circle


Objective to clean our Kuddupadavu circle .

Kuddupadavu is the main junction towards perla,Vittal,Peruvai .

The people who travel by vehicle are not able to identify vehicles coming from the other side .
So we spent 4 people 8 hours to clean this area.

1) Picture after clean the area .

2) Picture before clean the area .
 3) Team members involved in the cleaning program.


Swatch Kuddupadavu ..

Date on  9th August 2015