ಜ್ವರ , ಶೀತ , ಕಫ ಇತ್ಯಧಿಗಳಿಗೆ ದಿವ್ಯ ಔಷಧ .
ಆಯುರ್ವೇದಿಕ್ ಗಿಡಮೂಲಿಕೆಗಳ ಕಿರು ಪರಿಚಯ .
೧) ಕಿರಾತ ಕಡ್ಡಿ .
ಮಲೆನಾಡಿನ ಮನೆಯ ಸುತ್ತ ಮುತ್ತಲು ಸಾಮಾನ್ಯವಾಗಿ ಈ ಗಿಡಗಳನ್ನು ಕಾಣಬಹುದು . ಪೊದರು ಜಾತಿಯ ಗಿಡ .
೨) ಅಮೃತ ಬಳ್ಳಿ .
ಸಾಮಾನ್ಯವಾಗಿ ಗಿಡಮರಗಳ ಆಶ್ರಯದಲ್ಲಿ ಬೆಳೆಯಬಲ್ಲ ಬಳ್ಳಿ .
೩) ಭದ್ರ ಮುಷ್ಠಿ :-
ಸಾಮಾನ್ಯವಾಗಿ ಮನೆಯ ಅಂಗಳದಲ್ಲಿ ಈ ಸಸ್ಯಗಳು ಬೆಳೆಯುತ್ತವೆ . ಭದ್ರ ಮುಷ್ಟಿಯ ಗಡ್ಡೆಗಳನ್ನು ಔಷಧಿಗೆ ಉಪಯೋಗಿಸುತ್ತಾರೆ .
೪) ಕಾಳು ಮೆಣಸು .
ಸಾಂಬಾರು ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ .
ಔಷಧೀಯ ಗುಣಗಳನ್ನು ಹೊಂದಿರುತ್ತದೆ .
೫) ಶುಂಠಿ .
ಸಾಂಬಾರು ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ .
ಔಷಧೀಯ ಗುಣಗಳನ್ನು ಹೊಂದಿರುತ್ತದೆ
ಔಷಧಿ ತಯಾರಿಸುವ ವಿಧಾನ .
1) ಚಿತ್ರದಲ್ಲಿ ತೋರಿಸಿದ ಹಾಗೆ ಎಲ್ಲ ಔಷಧಿಯ ವಸ್ತುಗಳನ್ನು ತೆಗೆದುಕೊಳ್ಳಬೇಕು .
೧) ಕಿರಾತ ಕಡ್ಡಿ -- 25 gram
೨) ಅಮೃತ ಬಳ್ಳಿ -- 25 gram
೩) ಭದ್ರ ಮುಷ್ಠಿ -- 25 gram
೪) ಕಾಳು ಮೆಣಸು -- 5 gram
೫) ಶುಂಠಿ -- 25 gram
2) ಎಲ್ಲ ಔಷಧಿಯ ವಸ್ತುಗಳನ್ನು ಕಲ್ಲಿನಲ್ಲಿ ಕುಟ್ಟಿ ಪುಡಿ ಮಾಡಬೇಕು .
3) ಕಷಾಯ ತಯಾರಿಸುವ ವಿಧಾನ
ಕಲ್ಲಿನಲ್ಲಿ ಜಜ್ಜಿದ ಎಲ್ಲ ಗಿಡ ಮೂಲಿಕೆಗಳನ್ನು , ಒಂದು ಪಾತ್ರೆಯಲ್ಲಿ 800 ML ನೀರು ಹಾಕಿ 200 ML ಆಗುವ ತನಕ ಕುದಿಸ ಬೇಕು . ದಿನಕ್ಕೆ 3 ಬಾರಿ ಸೇವಿಸ ಬೇಕು . ಆಹಾರ ತೆಗೆಯುವ ಮೊದಲು ಉತ್ತಮ . ( ಒಂದು ಬಾರಿಗೆ 50 ML ಔಷಧಿಯನ್ನು ಸೋಸಿ ಕುಡಿಯಬಹುದು .)
ಇದರ ಉಪಯೋಗಗಳು .
ಯಾವುದೇ ದುಷ್ಪರಿಣಾಮ ಇರುವುದಿಲ್ಲ .
ಇದು ದೇಹದಲ್ಲಿ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ .
Thank you ..